ಕರ್ನಾಟಕ ಬಂದ್ : ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ!
ಶಿವಮೊಗ್ಗ, ಸೆ. 29: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ, ಶುಕ್ರವಾರ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಶಿವಮೊಗ್ಗ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಗರೀಕರ ದೈನಂದಿನ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲವಾಗಿದೆ.
ಸರ್ಕಾರಿ, ಖಾಸಗಿ ಬಸ್ ಗಳು, ಆಟೋ, ಟ್ಯಾಕ್ಸಿಗಳು ಸೇರಿದಂತೆ ಬಹುತೇಕ ಪ್ರಯಾಣಿಕ ವಾಹನಗಳ ಸಂಚಾರ ಎಂದಿನಂತಿತ್ತು. ಶಾಲಾ, ಕಾಲೇಜು, ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಿದವು. ವ್ಯಾಪಾರ, ವಹಿವಾಟಿಗೆ ಯಾವುದೇ ಅಡ್ಡಿಯಾಗಲಿಲ್ಲ. ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಜನಜೀವನ ಎಂದಿನಂತಿತ್ತು.
ಎಲ್ಲದಕ್ಕಿಂತ ಮುಖ್ಯವಾಗಿ, ನಗರದಲ್ಲಿ ಯಾವುದೇ ಸಂಘಟನೆಗಳು ಬಂದ್ ನಡೆಸುವ ಕುರಿತಂತೆ ನಾಗರೀಕರಿಗೆ ಮನವಿ ಮಾಡಿರಲಿಲ್ಲ. ಉಳಿದಂತೆ ಬಂದ್ ಬೆಂಬಲಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದವು.+
ಬಸ್ ನಿಲ್ದಾಣದ ಎದುರು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಹಾಗೂ ಕರವೇ ಜಂಟಿಯಾಗಿ ಪ್ರತಿಭಟಿಸಿದರೆ, ಗೋಪಿ ವೃತ್ತದಲ್ಲಿ ಕರವೇಯ ಮತ್ತೊಂದು ಬಣ ಪ್ರತಿಭಟಿಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘ ಧರಣಿ ನಡೆಸಿತು.
ಉಳಿದಂತೆ ಜಿಲ್ಲೆಯ ಇತರೆ ನಗರ – ಪಟ್ಟಣಗಳಲ್ಲಿಯೂ ಕರ್ನಾಟಕ ಬಂದ್ ನೀರಸವಾಗಿದ್ದ ವರದಿಗಳು ಬಂದಿವೆ. ಕನ್ನಡ ಪರ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿವೆ.
ಅಂಗಡಿಗಳ ಬಾಗಿಲು ಮುಚ್ಚುವಂತೆ ಮನವಿ!
*** ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಿವಮೊಗ್ಗದ ನೆಹರು ರಸ್ತೆಯಲ್ಲಿ ಅಂಗಡಿ-ಮುಂಗಟ್ಟು ಬಂದ್ ಮಾಡುವಂತೆ ವರ್ತಕರಿಗೆ ಮನವಿ ಮಾಡಿಕೊಂಡ ಘಟನೆ ನಡೆಯಿತು. ಈ ವೇಳೆ ಕೆಲ ವರ್ತಕರು ಸ್ವಲ್ಪ ಸಮಯದವರೆಗೆ ಅಂಗಡಿ ಬಾಗಿಲು ಮುಚ್ಚಿದರು. ಮತ್ತೆ ಕೆಲ ವರ್ತಕರು ಕಾರ್ಯಕರ್ತರ ಜೊತೆ ವಾಗ್ದಾದ ನಡೆಸಿದ ಘಟನೆಯೂ ನಡೆದಿದೆ.
More Stories
shimoga news update | ಶಿವಮೊಗ್ಗ ಡಿಸಿ – ಎಸ್ಪಿ ವರ್ಗಾವಣೆ!
Shivamogga DC – SP transfer!
ಶಿವಮೊಗ್ಗ ಡಿಸಿ – ಎಸ್ಪಿ ವರ್ಗಾವಣೆ!
Shivamogga, December 31: The state government has issued orders transferring Shivamogga Deputy Commissioner Gurudatta Hegde and District Defence Officer GK Mithun Kumar.
shimoga news | ವಿಶ್ವವಿದ್ಯಾಲಯ ನೌಕರರಿಗೆ ಹಳೆಯ ಪಿಂಚಣಿ ನಿರಾಕರಣೆ : ಕುವೆಂಪು ವಿವಿ ಅಧ್ಯಾಪಕರ ಸಂಘ ಆಕ್ರೋಶ!
Denial of old pension to university employees: Kuvempu University Teachers’ Association expresses strong outrage against government discrimination!
ವಿಶ್ವವಿದ್ಯಾಲಯ ನೌಕರರಿಗೆ ಹಳೆಯ ಪಿಂಚಣಿ ನಿರಾಕರಣೆ : ಕುವೆಂಪು ವಿವಿ ಅಧ್ಯಾಪಕರ ಸಂಘ ಆಕ್ರೋಶ
Bhadravati news | ಬೊಲೆರೋ ಪಲ್ಟಿ : 14 ಜನರಿಗೆ ಗಾಯ!
Bhadravati | Bolero overturned: 14 people injured!
ಬೊಲೆರೋ ವಾಹನ ಪಲ್ಟಿ : 14 ಜನರಿಗೆ ಗಾಯ!
shimoga news | new year | ಶಿವಮೊಗ್ಗ : ಕೇಕ್ ತಯಾರಿಕ ಕೇಂದ್ರದಲ್ಲಿ ಅಧಿಕಾರಿಗಳ ತಂಡದಿಂದ ತಪಾಸಣೆ!
Shivamogga: Inspection by a team of officials at a cake manufacturing unit!
ಶಿವಮೊಗ್ಗ : ಕೇಕ್ ತಯಾರಿಕ ಘಟಕದಲ್ಲಿ ಅಧಿಕಾರಿಗಳ ತಂಡದಿಂದ ತಪಾಸಣೆ!
shimoga crime news | ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!
Operation against cannabis across Shimoga district!
ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!
shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂತೆ ದಾನಿಗಳ ನೆರವಿನಹಸ್ತ
Shivamogga: Houses damaged by cylinder explosion – Donors join hands with Red Cross to help
ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂಥೆ ದಾನಿಗಳ ನೆರವಿನಹಸ್ತ
