sagara | ಈಜಲು ತೆರಳಿದ ಬೆಂಗಳೂರಿನ ವಿದ್ಯಾರ್ಥಿ ನೀರುಪಾಲು!

ಸಾಗರ (sagar), ಆ. 23: ಈಜಾಡಲು ತೆರಳಿದ ಬೆಂಗಳೂರು (bengaluru) ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ, ಸಾಗರ ತಾಲೂಕಿನ ಆನಂದಪುರದ (sagara taluk anandapura) ಚಂಪಕ ಸರಸು ಕಲ್ಯಾಣಿಯಲ್ಲಿ ಆ. 23 ರ ಶುಕ್ರವಾರ ನಡೆದಿದೆ.

ಬೆಂಗಳೂರಿನ ಆಂಜನ್ ನಗರದ ನಿವಾಸಿ ಕುಶಾಲ್ ದೇವ್ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾನೆ (engineer college student).

ಮೃತ ಕುಶಾಲ್ ದೇವ್ ಕಾಲೇಜ್ ನ ಸಹಪಾಠಿಗಳಾದ ಸಾಯಿರಾಂ ಹಾಗೂ ಯಶವಂತ್ ಎಂಬುವರೊಂದಿಗೆ, ಗುರುವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ (shimoga district) ಪ್ರವಾಸಕ್ಕೆ ಆಗಮಿಸಿದ್ದರು.

ಶುಕ್ರವಾರ ಇತಿಹಾಸ ಪ್ರಸಿದ್ದ ಚಂಪಕ ಸರಸು (champaka sarasu) ಕಲ್ಯಾಣಿಗೆ ಆಗಮಿಸಿದ್ದಾರೆ. ಕುಶಾಲ್ ದೇವ್ ಅವರು ಈಜಾಡಲು (swimming) ತೆರಳಿದ್ದಾರೆ. ಈ ವೇಳೆ ಕಲ್ಯಾಣಿಯಲ್ಲಿ ಮುಳುಗಿ ಅಸುನೀಗಿದ್ದಾರೆ. ಅಗ್ನಿಶಾಮಕ ದಳ (fire brigade) ಆಗಮಿಸಿ ನೀರಿನಿಂದ ಶವ ಹೊರ ತೆಗೆದಿದೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ (psi) ಯುವರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ (anandapura police station) ಪ್ರಕರಣ ದಾಖಲಾಗಿದೆ.  

The doctor successfully reattached the hand of a laborer who got stuck in a tree cutting machine! ಮರ ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕಾರ್ಮಿಕನ ಕೈಯನ್ನು, ಯಶಸ್ವಿಯಾಗಿ ಮರುಜೋಡಿಸಿದ ವೈದ್ಯರು! Previous post shimoga | ಮರ ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕಾರ್ಮಿಕನ ಕೈಯನ್ನು, ಯಶಸ್ವಿಯಾಗಿ ಮರುಜೋಡಿಸಿದ ವೈದ್ಯರು!
ಶಿರಾಳಕೊಪ್ಪ ಪೊಲೀಸ್ ಠಾಣೆ Cattle theft near Shiralakoppa: Haveri district Hirekerur man arrested! ಶಿರಾಳಕೊಪ್ಪ ಬಳಿ ಜಾನುವಾರುಗಳ ಕಳವು : ಹಾವೇರಿ ಜಿಲ್ಲೆ ಹಿರೇಕೆರೂರು ವ್ಯಕ್ತಿ ಅರೆಸ್ಟ್! Next post shikaripur | ಶಿರಾಳಕೊಪ್ಪ – ಜಾನುವಾರುಗಳ ಕಳವು : ಹಾವೇರಿ ಜಿಲ್ಲೆ ಹಿರೇಕೆರೂರು ಆರೋಪಿ ಅರೆಸ್ಟ್!