
sagara | ಈಜಲು ತೆರಳಿದ ಬೆಂಗಳೂರಿನ ವಿದ್ಯಾರ್ಥಿ ನೀರುಪಾಲು!
ಸಾಗರ (sagar), ಆ. 23: ಈಜಾಡಲು ತೆರಳಿದ ಬೆಂಗಳೂರು (bengaluru) ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ, ಸಾಗರ ತಾಲೂಕಿನ ಆನಂದಪುರದ (sagara taluk anandapura) ಚಂಪಕ ಸರಸು ಕಲ್ಯಾಣಿಯಲ್ಲಿ ಆ. 23 ರ ಶುಕ್ರವಾರ ನಡೆದಿದೆ.
ಬೆಂಗಳೂರಿನ ಆಂಜನ್ ನಗರದ ನಿವಾಸಿ ಕುಶಾಲ್ ದೇವ್ (22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾನೆ (engineer college student).
ಮೃತ ಕುಶಾಲ್ ದೇವ್ ಕಾಲೇಜ್ ನ ಸಹಪಾಠಿಗಳಾದ ಸಾಯಿರಾಂ ಹಾಗೂ ಯಶವಂತ್ ಎಂಬುವರೊಂದಿಗೆ, ಗುರುವಾರ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ (shimoga district) ಪ್ರವಾಸಕ್ಕೆ ಆಗಮಿಸಿದ್ದರು.
ಶುಕ್ರವಾರ ಇತಿಹಾಸ ಪ್ರಸಿದ್ದ ಚಂಪಕ ಸರಸು (champaka sarasu) ಕಲ್ಯಾಣಿಗೆ ಆಗಮಿಸಿದ್ದಾರೆ. ಕುಶಾಲ್ ದೇವ್ ಅವರು ಈಜಾಡಲು (swimming) ತೆರಳಿದ್ದಾರೆ. ಈ ವೇಳೆ ಕಲ್ಯಾಣಿಯಲ್ಲಿ ಮುಳುಗಿ ಅಸುನೀಗಿದ್ದಾರೆ. ಅಗ್ನಿಶಾಮಕ ದಳ (fire brigade) ಆಗಮಿಸಿ ನೀರಿನಿಂದ ಶವ ಹೊರ ತೆಗೆದಿದೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ (psi) ಯುವರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ (anandapura police station) ಪ್ರಕರಣ ದಾಖಲಾಗಿದೆ.
More Stories
sagara | ಸಾಗರದಲ್ಲಿ ಪೊಲೀಸರಿಂದ ಪಥ ಸಂಚಲನ!
Sagara city : police take out route march on august 26
ಸಾಗರದಲ್ಲಿ ಪೊಲೀಸರಿಂದ ಪಥ ಸಂಚಲನ!
ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ
Peace Committee meeting in Sagar, Shiralakoppa: SP calls for celebrating festivals with harmony
ಸಾಗರ, ಶಿರಾಳಕೊಪ್ಪದಲ್ಲಿ ಶಾಂತಿ ಸಮಿತಿ ಶಾಂತಿ ಸಮಿತಿ ಸಭೆ : ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಎಸ್ಪಿ ಕರೆ
kargal | ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ!
Police parade in Kargal town!
ಕಾರ್ಗಲ್ ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ
sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ!
Sagara: Gas cylinder explosion at home!
sagara | ಸಾಗರ : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ!
sagara | ಸಾಗರ – ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ!
Sagara – Fatal road accident : One dead, 8 injured!
ಸಾಗರ – ಭೀಕರ ರಸ್ತೆ ಅಪಘಾತ : ಓರ್ವರ ಸಾವು, 8 ಜನರಿಗೆ ಗಾಯ!
sigandur bridge | ಸಿಗಂದೂರು ಸೇತುವೆ ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
Union Minister Nitin Gadkari inaugurated Sigandur Bridge
ಸಿಗಂದೂರು ಸೇತುವೆ ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ