
shimoga news | ವಂಚಕರ ಸಾಲದ ಆಮಿಷಕ್ಕೆ 4 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ!
ಶಿವಮೊಗ್ಗ (shivamogga), ಜು. 12: ವಂಚಕರ ಸಾಲದ ಆಮಿಷದ ಜಾಲಕ್ಕೆ ಸಿಲುಕಿದ ಶಿವಮೊಗ್ಗದ ವ್ಯಕ್ತಿಯೋರ್ವರು, ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಕಾಶೀಪುರ ಬಡಾವಣೆ ನಿವಾಸಿ ಹರೀಶ್ ಸಿ (54) ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನೀದು ಪ್ರಕರಣ? : 28-06-2025 ರಂದು ಮಧ್ಯಾಹ್ನ 1 ಗಂಟೆಗೆ ಅಪರಿಚಿತ ನಂಬರ್ ನಿಂದ ಹರೀಶ್ ರವರ ಮೊಬೈಲ್ ಫೋನ್ ಗೆ ಕರೆ ಬಂದಿತ್ತು. ಫೈನಾನ್ಸ್ ನವರೆಂದು ಹೇಳಿಕೊಂಡಿದ್ದ ವಂಚಕನೋರ್ವ, 8 ಲಕ್ಷ ರೂ.ಗಳವರೆಗೆ ಸಾಲ ಕೊಡುತ್ತೆವೆ ಎಂದು ನಂಬಿಸಿದ್ದ.
ಆಸಕ್ತಿ ಇದ್ದರೆ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ದೂರುದಾರ ಹರೀಶ್ ಅವರು, ತಮ್ಮ ಬ್ಯಾಂಕ್ ಮಾಹಿತಿಯನ್ನು ಪಿಡಿಎಫ್ ಮಾದರಿಯಲ್ಲಿ ವಂಚಕನ ನಂಬರ್ ಗೆ ಕಳುಹಿಸಿದ್ದರು .
30-06-2025 ರಂದು ವಿವಿಧ ಶುಲ್ಕ ಪಾವತಿಸಬೇಕೆಂದು ನಂಬಿಸಿ ಒಟ್ಟಾರೆ 4,13,596 ರೂ.ಗಳನ್ನು ವಂಚಕರು ಆನ್’ಲೈನ್ ಮೂಲಕ ಪಾವತಿಸಿಕೊಂಡಿದ್ದರು. ಆದರೆ ನಂತರ ಸಾಲವೂ ನೀಡದೆ, ಪಾವತಿಸಿಕೊಂಡ ಹಣವೂ ಕೊಡದೆ ವಂಚಿಸಿದ್ದಾರೆ.
Shivamogga, July 12: A person from Shivamogga was duped of lakhs of rupees after falling into the trap of a fraudster who lured him with a loan. A case has been registered at Vinobanagar police station in this regard.