ಶಿಕಾರಿಪುರ (shikaripura), ಆ. 25: ಆಕಸ್ಮಿಕವಾಗಿ ನೀರಿನ ಕೊಳಕ್ಕೆ ಕಾಲು ಜಾರಿ ಬಿದ್ದು, ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಶಿಕಾರಿಪುರ ತಾಲೂಕು ಉಡುಗಣಿಯ ಅಕ್ಕಮಹಾದೇವಿ ದೇವಾಲಯ (udugani akkamahadevi temple) ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ.
ಶಿರಾಳಕೊಪ್ಪ (shiralkoppa) ಪಟ್ಟಣದ ಗಡಂಗಡಕೇರಿ ನಿವಾಸಿ ತಾಹೀರ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಭಾನುವಾರ ರಜೆಯಿದ್ದ ಕಾರಣದಿಂದ ಮೃತ ತಾಹೀರ್ ಅವರು ಸ್ನೇಹಿತರೊಂದಿಗೆ ಕೊಳದ ಬಳಿ ಆಗಮಿಸಿದ್ದರು.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೊಳಕ್ಕೆ ಬಿದ್ದು, ನೀರಿನಲ್ಲಿ ಮುಳುಗಿದ್ದಾರೆ. ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಕೊಳದಿಂದ ಶವವನ್ನು ಹೊರ ತೆಗೆಯಲಾಗಿದೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ (shiralkoppa police station) ಪ್ರಕರಣ ದಾಖಲಾಗಿದೆ.

