ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ : ಎನ್ಐಎ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

shimoga | ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ : NIA ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು (bengaluru), ಅ. 1: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು, ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರಕರಣದ ಆರೋಪಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು, ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿ ತೀರ್ಪು ನೀಡಿದೆ.

ಪ್ರಕರಣದ ಆರೋಪಿಯಾದ ಎ.ರೋಷನ್ (27) ಎಂಬುವರು ಈ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ಕಾಯ್ದಿರಿಸಿದ್ದ ತೀರ್ಪನ್ನು, ಇದೇ 20 ರಂದು ಪ್ರಕಟಿಸಿತ್ತು. ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

‘ಪ್ರಕರಣವನ್ನು ಎನ್ಐಎಗೆ ತನಿಖೆ ಒಪ್ಪಿಸಲು ಅನುಮತಿ ಪಡೆದಿಲ್ಲ. ಪ್ರಕರಣದಲ್ಲಿ ಯುಎಪಿಎ ಅಂತಹ ಗಂಭೀರ ಪ್ರಕರಣ ದಾಖಲಿಸಲು ಯಾವುದೇ ಆಧಾರವಿಲ್ಲ’ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಅವರು, ‘ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಸಾಕಷ್ಟು ಅಂಶಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಎನ್ಐಎ ತನಿಖೆಗೊಪ್ಪಿಸಿದೆ’ ಎಂದು ಪ್ರತಿವಾದ ಮಂಡಿಸಿದ್ದರು. ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿ ಅರ್ಜಿ ವಜಾಗೊಳಿಸಿ ತೀರ್ಪು ನೀಡಿದೆ.

ಕೊಲೆ ಪ್ರಕರಣ : 2022 ರ ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದ ಭಾರತೀ ಕಾಲೋನಿ ಬಳಿ, ಹರ್ಷ (28) ಕೊಲೆ ನಡೆದಿತ್ತು. 2022 ರ ಮಾರ್ಚ್ 21 ರಂದು ಕೇಂದ್ರ ಸರ್ಕಾರವು ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆಗೊಪ್ಪಿಸಿ ಆದೇಶ ಹೊರಡಿಸಿತ್ತು.


Bengaluru: A division bench of the High Court dismissed the petition
filed by one of the accused questioning the central government’s decision to
hand over the investigation into the murder of Bajrang Dal activist Harsha of
Shimoga to the National Investigation Agency.

Shimoga: Three-and-a-half-year-old Kona (turmeric-colored tag on ear) and two-and-a-half-year-old buffalo Manaka (purple fruit-colored tag on ear, white complexion) left in the name of God have gone missing. Previous post shimoga | ಶಿವಮೊಗ್ಗ : ನಾಪತ್ತೆಯಾದ ಎಮ್ಮೆಗಳ ಪತ್ತೆಗೆ ಸಹಕರಿಸಲು ಮನವಿ
A new system will be implemented in the offices of the sub-registrar of Shimoga district : Real estate registration will fall to irregularities! ಶಿವಮೊಗ್ಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಾರಿಯಾಗಲಿದೆ ಹೊಸ ವ್ಯವಸ್ಥೆ : ಸ್ಥಿರಾಸ್ತಿ ನೊಂದಣಿ ಅಕ್ರಮಗಳಿಗೆ ಬೀಳಲಿದೆ ಕಡಿವಾಣ! Next post shimoga | ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಯಾಗಲಿದೆ ಹೊಸ ವ್ಯವಸ್ಥೆ : ಸ್ಥಿರಾಸ್ತಿ ನೊಂದಣಿ ಅಕ್ರಮಗಳಿಗೆ ಬೀಳಲಿದೆ ಕಡಿವಾಣ!