shimoga | Waterlogged during rains - Bangalore's plight is also in Shivamogga city: Will the administrators wake up? shimoga | ಮಳೆ ವೇಳೆ ಜಲಾವೃತ - ಶಿವಮೊಗ್ಗ ನಗರದಲ್ಲಿಯೂ ಬೆಂಗಳೂರು ದುಃಸ್ಥಿತಿ : ಎಚ್ಚೆತ್ತುಕೊಳ್ಳುವರೆ ಆಡಳಿತಗಾರರು?

shimoga | ಶಿವಮೊಗ್ಗ – ಉಕ್ಕಿ ಹರಿದ ಕೆರೆಗಳು : ಜಲಾವೃತವಾದ ಬಡಾವಣೆ ; ಗಮನಹರಿಸುವುದೆ ಜಿಲ್ಲಾಡಳಿತ?!

ಶಿವಮೊಗ್ಗ (shivamogga), ಆ. 19: ಭಾರೀ ಮಳೆಯಿಂದ (heavy rainfall) ಕೆರೆಗಳು ಉಕ್ಕಿ ಹರಿದ ಪರಿಣಾಮ, ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಕೆ.ಹೆಚ್.ಬಿ ಪ್ರೆಸ್ ಕಾಲೋನಿಯು (sominakoppa khb press colony) ಆಗಸ್ಟ್ 19 ರ ಸೋಮವಾರ ಸಂಜೆ ಜಲಾವೃತವಾದ (flooded) ಘಟನೆ ನಡೆದಿದೆ.

ಸೋಮವಾರ ಮಧ್ಯಾಹ್ನ ಬಿದ್ದ ಭಾರೀ ಮಳೆಗೆ (rain), ಬಸವನಗಂಗೂರು (basavanaganguru) ಹಾಗೂ ಗೆಜ್ಜೇನಹಳ್ಳಿ (gejjenahalli) ಗ್ರಾಮದ ಎರಡು ಕೆರೆಗಳು (lakes) ಉಕ್ಕಿ ಹರಿಯಲಾರಂಭಿಸಿವೆ. ಏರಿಯ ಮಟ್ಟಕ್ಕೆ ನೀರು ಬಂದಿದೆ.

ಎರಡು ಕೆರೆಗಳಿಂದ ಭಾರೀ ಪ್ರಮಾಣದ ನೀರು (outflow) ಹೊರಬರುತ್ತಿರುವುದು ಹಾಗೂ ಅವ್ಯವಸ್ಥಿತ ಕೆರೆ ಕಾಲುವೆಯಿಂದ, ತಗ್ಗು ಪ್ರದೇಶದಲ್ಲಿರುವ (low lying area) ಕೆ.ಹೆಚ್.ಬಿ ಕಾಲೋನಿಗೆ ಭಾರೀ ಪ್ರಮಾಣದ ನೀರು ಬರುತ್ತಿದೆ. ಬಡಾವಣೆಯ ರಸ್ತೆಗಳು ಜಲಾವೃತವಾಗಿವೆ. ಕೆಲ ಮನೆಗಳಿಗೂ ನೀರು ನುಗ್ಗಿದೆ.

‘ಈಗಾಗಲೇ ಮಹಾನಗರ ಪಾಲಿಕೆ (corporation) ಆಡಳಿತವು ಬಡಾವಣೆಯ ಒಂದು ಬದಿಯಲ್ಲಿ ಮಳೆ ನೀರು ಹರಿದು ಹೋಗಲು ರಾಜಕಾಲುವೆ (rajakaluve) ನಿರ್ಮಾಣ ಮಾಡಿದೆ. ಆದರೆ ಕೆರೆಯಿಂದ ಕಾಲೋನಿಯವರೆಗೆ ಕೆರೆ ಕಾಲುವೆಯು ಕಿರಿದಾಗಿದೆ.

ಭಾರೀ ಪ್ರಮಾಣದ ಕೆರೆ ನೀರು ಹರಿದು ಬಂದ ವೇಳೆ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಬಡಾವಣೆಯ ಎಲ್ಲೆಂದರಲ್ಲಿ ನುಗ್ಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಡಳಿತ, ಸಣ್ಣ ನೀರಾವರಿ ಇಲಾಖೆ (minor irrigation department) ಹಾಗೂ ಜಿಲ್ಲಾ ಪಂಚಾಯ್ತಿ (zilla panchayat) ಆಡಳಿತ ಅಗತ್ಯ ಗಮನಹರಿಸಬೇಕಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಪ್ರಸ್ತುತ ಹಲವೆಡೆ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಸರಾಗವಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ. ತಕ್ಷಣವೇ ಆಡಳಿತ ತುರ್ತು ಪರಿಹಾರಕ ಕ್ರಮಕೈಗೊಳ್ಳಬೇಕು. ಶಾಶ್ವತವಾಗಿ ಜಲಾವೃತ ಸಮಸ್ಯೆ ಪರಿಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಹೋರಾಟದ ಎಚ್ಚರಿಕೆ : ಬಡಾವಣೆಯಲ್ಲಿನ ಜಲಾವೃತ ಸಮಸ್ಯೆ ಪರಿಹಾರವಾಗದಿದ್ದರೆ ಮುಂದಿನ ದಿನಗಳಂದು ಬೀದಿಗಿಳಿದು ಹೋರಾಟ ನಡೆಸಲಾಗುವುದು. ಜೊತೆಗೆ ಮುಖ್ಯಮಂತ್ರಿಗಳನ್ನು (chief minister) ಭೇಟಿಯಾಗಿ ಮನವಿ ನೀಡಲಾಗುವುದು ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

accident | shimoga - A car collided with an electric pole : a missed disaster! ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ತಪ್ಪಿದ ಅನಾಹುತ! Previous post shimoga | ಶಿವಮೊಗ್ಗ – ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ತಪ್ಪಿದ ಅನಾಹುತ!
shimoga | Shimoga - An unknown person died in an accident: Traffic police requested to help in tracing the heirs shimoga | ಶಿವಮೊಗ್ಗ - ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಟ್ರಾಫಿಕ್ ಪೊಲೀಸರ ಮನವಿ Next post shimoga | ಶಿವಮೊಗ್ಗ – ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಟ್ರಾಫಿಕ್ ಪೊಲೀಸರ ಮನವಿ