bhadravati | ಭದ್ರಾವತಿ - ಸೈಬರ್ ವಂಚನೆಗೆ ಮನನೊಂದು ಆತ್ಮಹತ್ಯೆಗೆ ಶರಣಾದ! bhadravati | Bhadravati - committed suicide due to cyber fraud!

bhadravati | ಭದ್ರಾವತಿ – ಸೈಬರ್ ವಂಚನೆಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಯುವಕ!

ಭದ್ರಾವತಿ (bhadravati), ಆ. 24: ಸೈಬರ್ ವಂಚಕರ (cyber fraudsters) ಸುಳ್ಳು ಸಂದೇಶ ನಂಬಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಯುವಕನೋರ್ವ, ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (hanging suicide) ಶರಣಾದ ಘಟನೆ, ಭದ್ರಾವತಿ ನಗರದ ಪೇಪರ್ ಟೌನ್ ಬಡಾವಣೆಯಲ್ಲಿ ನಡೆದಿದೆ.

ಪ್ರದೀಪ್ (27) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಇವರು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು.

ಪ್ರದೀಪ್ ಅವರು ಟೆಲಿಗ್ರಾಂ ಆಪ್ (telegram app) ನಲ್ಲಿ ಬಂದ ಉದ್ಯೋಗಕ್ಕೆ ಸಂಬಂಧಿಸಿದ ಸೈಬರ್ ವಂಚಕರ ಸುಳ್ಳು ಸಂದೇಶ ನಂಬಿ, ಸುಮಾರು 70 ಸಾವಿರಕ್ಕೂ ಅಧಿಕ ಹಣ ಸಾಲ ಮಾಡಿ ಹೂಡಿಕೆ ಮಾಡಿದ್ದರು. ಆದರೆ ತದನಂತರ ವಂಚನೆಗೊಳಗಾಗಿರುವುದು ಅವರಿಗೆ ಗೊತ್ತಾಗಿದೆ.

ಇದರಿಂದ ಮನನೊಂದ ಪ್ರದೀಪ್ ಅವರು ಆ.23 ರ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ (paper town police station) ಪ್ರಕರಣ ದಾಖಲಾಗಿದೆ.

'It is a tragedy that the educated people are increasingly becoming casteists' : CM Siddaramaiah ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ : ಸಿಎಂ ಸಿದ್ದರಾಮಯ್ಯ Previous post bengaluru | ‘ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ’ : ಸಿಎಂ ಸಿದ್ದರಾಮಯ್ಯ 
wild elephant attack : Gadag-based agricultural laborer dies - demand for appropriate compensation ಕಾಡಾನೆ ದಾಳಿ : ಗದಗ ಮೂಲದ ಕೃಷಿ ಕೂಲಿ ಕಾರ್ಮಿಕ ಸಾವು – ಸೂಕ್ತ ಪರಿಹಾರಕ್ಕೆ ಆಗ್ರಹ Next post ಕಾಡಾನೆ ದಾಳಿ : ಗದಗ ಮೂಲದ ಕೃಷಿ ಕೂಲಿ ಕಾರ್ಮಿಕ ಸಾವು – ಸೂಕ್ತ ಪರಿಹಾರಕ್ಕೆ ಆಗ್ರಹ