hosanagara | ಹೊಸನಗರ – ಶುಂಠಿ ಹೊಲದ ಶೆಡ್ ನಲ್ಲಿ ನಾಡ ಬಂದೂಕು ತಯಾರಿ..!
ಹೊಸನಗರ (hosanagara), ಸೆ. 11: ಜಮೀನೊಂದರಲ್ಲಿ ನಾಡ ಬಂದೂಕು (ಕೋವಿ) ತಯಾರಿಸುತ್ತಿದ್ದ ಶೆಡ್ (shed) ಮೇಲೆ ಪೊಲೀಸರು ದಾಳಿ (police raid) ನಡೆಸಿದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಹೋಬಳಿ ಕಾಳಿಕಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಹೊಸನಗರ ಪೊಲೀಸ್ ಠಾಣೆ (hosanagara police station) ಸಬ್ ಇನ್ಸ್’ಪೆಕ್ಟರ್ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಪೊಲೀಸರ ದಾಳಿಯ ಮಾಹಿತಿ ಅರಿತ ಆರೋಪಿಗಳು (accused), ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಡಿವೈಎಸ್ಪಿ (dysp) ಗಜಾನನ ವಾಮನ ಸುತಾರ, ಇನ್ಸ್’ಪೆಕ್ಟರ್ (inspector) ಗುರಣ್ಣಹೆಬ್ಬಾರ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸನಗರ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ತಯಾರಿಗೆ ಸಜ್ಜು : ಮೂವರು ಆರೋಪಿಗಳು ಶುಂಠಿ ಹೊಲದ ಶೆಡ್ (ginger field shed) ನಲ್ಲಿ ನಾಡ ಬಂದೂಕು (country gun) ತಯಾರಿಗೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ದಾಳಿ ವೇಳೆ ಬಂದೂಕು ತಯಾರಿಗೆ ಬಳಸುವ ನಳಿಕೆಗಳು, ಮರದ ಹಿಡಿಕೆ, ಟ್ರಿಗರ್, ಕೇಪ್, ಮದ್ದುಗುಂಡುಗಳನ್ನು ಪೊಲೀಸರು (police) ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನದ ನಂತರವಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
More Stories
hosanagara | ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ!
Hosanagara : Man killed by accidental discharge from a loaded gun!
ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ!
hosanagara accident | ಎರಡು ಪತ್ಯೇಕ ರಸ್ತೆ ಅಪಘಾತ : ಚಾಲಕ ಸಾವು – ಇಬ್ಬರಿಗೆ ಗಾಯ!
Two separate road accidents: Driver dies, two injured!
ಎರಡು ಪತ್ಯೇಕ ರಸ್ತೆ ಅಪಘಾತ : ಚಾಲಕ ಸಾವು – ಇಬ್ಬರಿಗೆ ಗಾಯ!
yadur abbi falls | ನೋಡ ನೋಡುತ್ತಿದ್ದಂತೆ ಅಬ್ಬಿ ಫಾಲ್ಸ್ ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ!
shimoga | hosanagara | A young man from Bangalore who was crushed in Abby Falls! ನೋಡ ನೋಡುತ್ತಿದ್ದಂತೆ ಅಬ್ಬಿ ಫಾಲ್ಸ್ ನಲ್ಲಿ ಕೊಚ್ಚಿ ಹೋದ ಬೆಂಗಳೂರಿನ ಯುವಕ!
hosanagara | ripponpet | ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾ**ವು!
Ripponpet : Head-on collision of bikes – teacher dead!
ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾವು!
hosanagara BREAKING NEWS | ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ!
Heavy rain: Holiday declared for schools and colleges in Hosanagar taluk!
ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ!
hosanagara | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಬಿ ವೈ ರಾಘವೇಂದ್ರ ಹೇಳಿದ್ದೇನು?
When will the Sigandur Bridge be inaugurated? What did MP BY Raghavendra say?
hosanagara | ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಬಿ ವೈ ರಾಘವೇಂದ್ರ ಹೇಳಿದ್ದೇನು?
