shimoga | ಶಿವಮೊಗ್ಗ – ಕಾಶೀಪುರ ಫ್ಲೈ ಓವರ್ ರಸ್ತೆಯಲ್ಲಿ ಗುಂಡಿ ಗಂಡಾಂತರ : ಗಮನಿಸುವುದೆ ಪಿಡಬ್ಲ್ಯೂಡಿ?
ಶಿವಮೊಗ್ಗ (shivamogga), ಮೇ 29: ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಮೇಲ್ಸುತುವೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಯು, ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ನಾಗರೀಕರು ದೂರಿದ್ದಾರೆ.
ಕಳೆದ ಹಲವು ದಿನಗಳಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಸುಗಮ ವಾಹನ ಸಂಚಾರಕ್ಕೆ ಅಡೆತಡೆಯಾಗಿ ಪರಿಣಮಿಸುತ್ತಿದೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿದೆ. ಸದರಿ ಗುಂಡಿ ಕಾರಣದಿಂದಲೇ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಸ್ತುತ ಮಳೆಯಾಗುತ್ತಿರುವುದರಿಂದ ಸದರಿ ಗುಂಡಿಯಲ್ಲಿ ನೀರು ತುಂಬಿಕೊಂಡು, ರಾತ್ರಿ ವೇಳೆ ಸವಾರರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ತಕ್ಷಣವೇ ಪಿಡಬ್ಲ್ಯೂಡಿ ಇಲಾಖೆ ಸದರಿ ಗುಂಡಿ ಮುಚ್ಚಲು ಕ್ರಮಕೈಗೊಳ್ಳಬೇಕಾಗಿದೆ.
ಹಾಗೆಯೇ ಸದರಿ ಫ್ಲೈ ಓವರ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚುತ್ತಿದೆ. ಕೆಲ ವಾಹನ ಸವಾರರು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದಾರೆ. ಈ ಕಾರಣದಿಂದ ವಾಹನಗಳ ವೇಗ ನಿಯಂತ್ರಣಕ್ಕೆ ವೈಜ್ಞಾನಿಕ ರಸ್ತೆ ಉಬ್ಬು ನಿರ್ಮಾಣ, ಸೂಚನಾ ಫಲಕಗಳ ಅಳವಡಿಕೆ ಮಾಡಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.
Shivamogga, May 29: Citizens have complained that a pothole on the Kashipur Railway Overpass Road in Shivamogga city has become dangerous for motorists. For the past several days, a pothole has formed on the road, hindering smooth vehicular movement. It is especially dangerous for two-wheeler riders. Locals said that minor accidents are occurring due to the said pothole.
More Stories
Bhadravati news | ಬೊಲೆರೋ ಪಲ್ಟಿ : 14 ಜನರಿಗೆ ಗಾಯ!
Bhadravati | Bolero overturned: 14 people injured!
ಬೊಲೆರೋ ವಾಹನ ಪಲ್ಟಿ : 14 ಜನರಿಗೆ ಗಾಯ!
shimoga news | new year | ಶಿವಮೊಗ್ಗ : ಕೇಕ್ ತಯಾರಿಕ ಕೇಂದ್ರದಲ್ಲಿ ಅಧಿಕಾರಿಗಳ ತಂಡದಿಂದ ತಪಾಸಣೆ!
Shivamogga: Inspection by a team of officials at a cake manufacturing unit!
ಶಿವಮೊಗ್ಗ : ಕೇಕ್ ತಯಾರಿಕ ಘಟಕದಲ್ಲಿ ಅಧಿಕಾರಿಗಳ ತಂಡದಿಂದ ತಪಾಸಣೆ!
shimoga crime news | ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!
Operation against cannabis across Shimoga district!
ಶಿವಮೊಗ್ಗ ಜಿಲ್ಲೆಯಾದ್ಯಂತ ಗಾಂಜಾ ವಿರುದ್ದ ಕಾರ್ಯಾಚರಣೆ!
shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂತೆ ದಾನಿಗಳ ನೆರವಿನಹಸ್ತ
Shivamogga: Houses damaged by cylinder explosion – Donors join hands with Red Cross to help
ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂಥೆ ದಾನಿಗಳ ನೆರವಿನಹಸ್ತ
hosanagara accident news | ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ
Private bus accident near Hulikal Ghat: Child dies, 10 passengers injured
ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ
shimoga news | ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ – ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ!
Shivamogga: ‘A penny’s worth of buttermilk for an elephant’s stomach…!’ – Basavanagangur Lake not filling up even after water is diverted from Tunga River! *Villagers’ discontent with the Small Irrigation Department
ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ – ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ! *ಸಣ್ಣ ನೀರಾವರಿ ಇಲಾಖೆ ವಿರುದ್ದ ಗ್ರಾಮಸ್ಥರ ಅಸಮಾಧಾನ
ವರದಿ : ಬಿ. ರೇಣುಕೇಶ್
