bengaluru | bhadravati |ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಸಿಎಂ ಭೇಟಿಯಾಗಿದ್ದೇಕೆ?

bengaluru | Bhadravati | Bhadravati MLA BK Sangamesh met CM? ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಸಿಎಂ ಭೇಟಿಯಾಗಿದ್ದೇಕೆ?

ಬೆಂಗಳೂರು (bengaluru), ಸೆ.12: ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಬಿ ಕೆ ಸಂಗಮೇಶ್ವರ (b k sangameshwara) ಅವರು, ಗುರುವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರನ್ನು ಭೇಟಿಯಾಗಿ, ಭದ್ರಾವತಿ ಕ್ಷೇತ್ರದ ವಿವಿಧ ಯೋಜನೆಗಳ ಕುರಿತಂತೆ ಚರ್ಚಿಸಿದರು.

ಭದ್ರಾವತಿ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಮೈಸೂರು ಪೇಪರ್ ಮಿಲ್ಸ್ ಕಾರ್ಖಾನೆ (mpm) ಯ ಪುನರುಜ್ಜೀವನ ಮತ್ತು ಸಿದ್ಧಾರೂಢನಗರ ಸೇತುವೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬಿ.ಕೆ.ಸಂಗಮೇಶ್ವರ್ ಚರ್ಚಿಸಿದರು ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಭದ್ರಾವತಿ (bhadravati) ಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ಶಾಸಕರು ಸಿಎಂ (cm) ಜತೆ ಸಮಾಲೋಚಿಸಿದ್ದಾರೆ ಎಂದು ಹೇಳಲಾಗಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಸಿಎಂ ಭೇಟಿಯ ವೇಳೆ ಶಾಸಕರ ಪುತ್ರ ಬಸವೇಶ್ ಅವರು ಉಪಸ್ಥಿತರಿದ್ದರು.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →