thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!
ತೀರ್ಥಹಳ್ಳಿ (thirthahalli), ಏ. 10: ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ಶಿವರಾಜಪುರ ಬಳಿ ಏ. 10 ರ ಮುಂಜಾನೆ ನಡೆದಿದೆ.
ತೀರ್ಥಹಳ್ಳಿ ಪಟ್ಟಣದ ಡಿಸಿಸಿ ಬ್ಯಾಂಕ್ ಶಾಖೆಯ ಕ್ಯಾಷಿಯರ್ ಶಾಶ್ವತ್ (30) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಕೊಂಡ್ಲುರು ಸಮೀಪದ ನೇರಳಮನೆಯ ನಿವಾಸಿಯಾಗಿದ್ಧಾರೆ ಎಂದು ತಿಳಿದುಬಂದಿದೆ.
ಮುಂಜಾನೆ 2 ರಿಂದ 2.30 ರ ನಡುವೆ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಗಾಯಾಳುಗಳನ್ನು ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಕ್ಯಾಷಿಯರ್ ಶಾಶ್ವತ್ ಇದ್ದ ಮಾರುತಿ ಸುಜುಕಿ ಎಸ್ಟಿಮೋ ಕಾರು ಆಗುಂಬೆ ಕಡೆಯಿಂದ ತೀರ್ಥಹಳ್ಳಿಯೆಡೆಗೆ ಹಾಗೂ ಬೊಲೆರೋ ಕಾರು ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಶ್ವತ್ ಇದ್ದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಬೊಲೆರೋ ಕಾರಿನಲ್ಲಿ ಚಾಲಕ ಮಾತ್ರ ಇದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಇಮ್ರಾನ್ ಬೇಗ್ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
Thirthahalli, Apr. 10: One person died on the spot and four others were seriously injured in a head-on collision between two cars near Shivarajpura in Thirthahalli taluk on the morning of Apr. 10. The deceased has been identified as Shashwat (30), a cashier at the DCC Bank branch in Thirthahalli town. He is a resident of Neralmane near Kondluru. #dccbank #dccbankemployee, #thirthahallidccbank,
More Stories
thirthahalli news | ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!
Theft case at thirthahalli Rameshwara Temple: Accused arrested!
ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!
ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?
Thirthahalli : Couple commits su**ic**ide in forest – what is the reason?
ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?
thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
thirthahalli | Thirthahalli – Car overturns near Mandagadde: Woman di**es!
thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
shimoga | kantara film | ತೀರ್ಥಹಳ್ಳಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!
Thirthahalli : Another shock for the ‘Kantara Chapter 1’ film team – a Kerala-based artist dies of a heart attack!
ತೀರ್ಥಹಳ್ಳಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ತಂಡಕ್ಕೆ ಮತ್ತೊಂದು ಶಾಕ್ – ಮತ್ತೋರ್ವ ಕಲಾವಿದ ಸಾವು!
thirthahalli | ತೀರ್ಥಹಳ್ಳಿ : ಕೆರೆಗೆ ಪಲ್ಟಿಯಾದ ಕಾರು – ಚಾಲಕ ಪಾರು!
Car overturns into lake near Thirthahalli – Driver from Shivamogga escapes!
ತೀರ್ಥಹಳ್ಳಿ ಸಮೀಪ ಕೆರೆಗೆ ಪಲ್ಟಿಯಾದ ಕಾರು – ಶಿವಮೊಗ್ಗದ ಚಾಲಕ ಪಾರು!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿ ಯುವತಿ!
thirthahalli | 19-year-old girl from Thirthahalli mysteriously disappears!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿಯ 19 ವರ್ಷದ ಯುವತಿ!
